Friday 21 August 2015

  ಸಂಭ್ರಮದ ಓಣಂ ಆಚರಣೆ  
ಓಣಂ ಹಬ್ಬದ ಪ್ರಯುಕ್ತ ಪೂಕಳಂ ರಚಿಸಲಾಯಿತು.ವಿವಿಧ ಆಟೋಟ ಸ್ಪರ್ದೆ ಇರಿಸಲಾಯಿತು.ಓಣಂ ಔತಣ ಕೂಟ ಏರ್ಪಡಿಸಲಾಯಿತು. 





Saturday 15 August 2015

 ಸಂಭ್ರಮದ ಸ್ವಾತಂತ್ರ್ಯೋತ್ಸವ 
ನಮ್ಮಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಾರ್ಡ್ಸಸದಸ್ಯೆಯಾದ ಶ್ರೀಮತಿ ಸರಸ್ವತಿ .ಕೆ ಧ್ವಜಾರೋಹಣ ಗೈದರು ಶಾಲಾ ಮೇನೇಜರ್ ಡಾ ಜ಼ಯಪ್ರಕಾಶ್ ನಾರಾಯಣ ಶುಭ ಹಾರೈಸಿದರು ಪಿ.ಟಿ.ಎ ಅದ್ಯಕ್ಷರಾದ ಸುಧಾಕರ ಶೆಟ್ಟಿ ಅಧ್ಯಕ್ಷಸ್ಥಾನ ಅಲಂಕರಿಸಿ ಭಾಷಣ ಮಾಡಿದರು.ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸದಾಶಿವ ರಾವ್ ಸ್ವಾತಂತ್ರ್ಯೋತ್ಸವದ ಕುರಿತು ಭಾಷಣ ಮಾಡಿದರು.ಶ್ರೀಮತಿ ನೀರಜಾಕ್ಷಿ ಟೀಚರ್ ಸ್ವಾಗತಿಸಿ ಶ್ರೀಮತಿ ವಿಜಯಲಕ್ಷ್ಮಿ ಟೀಚರ್ ದನ್ಯವಾದ ವಿತ್ತರು.ಶ್ರೀಮತಿ ರಾಜೇಶ್ವರಿ ಟೀಚರ್ ಕಾರ್ಯಕ್ರಮ ನಿರೂಪರಿಸಿದರು.ಬುಲ್ ಬುಲ್ ಮಕ್ಕಳು ಶಾಲಾ ಮಕ್ಕಳು ದೇಶಭಕ್ತಿಗೀತೆ,ನೃತ್ಯ ಭಾಷಣ ಮಾಡಿದರು.   









Friday 7 August 2015

 ಸುಸಜ್ಜಿತ ಶಾಲಾ ಮೈದಾನಕ್ಕಾಗಿ ದರ್ಮಸ್ಥಳದಿಂದ ಅನುದಾನ
 ನಮ್ಮ ಶಾಲೆಗೆ ದರ್ಮಸ್ತಳ ಗ್ರಾಮಾಭಿ ವೃದ್ದಿ ಯೋಜನೆಯ ನಿರ್ದೇಶಕರಾದ ಶ್ರೀ ಸುಧೀರ್ ಕುಮಾರ್ ಹಾಗೂ ಕುಂಬಳೆ ಯೋಜನಾದಿಕಾರಿಗಳಾದ ಸಂಧ್ಯಾ.ವಿ .ಶೆಟ್ಟಿ ಶಾಲಾ ಮೈದಾನ ನಿರ್ಮಿಸಲು ಚೆಕ್ಕನ್ನು ಶಾಲಾ ಮೇನೇಜರ್ ಡಾ ಜ಼ಯಪ್ರಕಾಶ್ ನಾರಾಯಣ ಇವರಿಗೆ ಹಸ್ತಾಂತರಿಸಿದರು ಸಭೆ ಯಲ್ಲಿ ಮೇಲ್ವಿಚಾರಕರಾದ ಶ್ರೀ ವಿಶ್ವನಾಥ ಕಾರ್ಯ ಕ್ಷೇತ್ರ ನಿರೂಪಣಾದಿಕಾರಿಗಳಾದ ಸುಲೋಚನಾ ಕುಮಾರಿ ಹಾಗೂ ಮುಖ್ಯೋಪಾದ್ಯಾಯರಾದ ಟಿ ಡಿ ಸದಾಶಿವ ರಾವ್ ಉಪಸ್ತಿತರಿದ್ದರು

  
 ಸಮವಸ್ತ್ರ ವಿತರಣೆ 
ಸರಕಾರದಿಂದ ನೀಡಲ್ಪಟ್ಟ ಸಮವಸ್ತ್ರವನ್ನು ಪಿ.ಟಿ.ಎ ಅದ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ ವಿದ್ಯಾರ್ಥಿಗಳಿಗೆ ವಿತರಿಸಿದರು.